ಶ್ರೀ ಕ್ಷೇತ್ರ ನೀಲಾವರ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 19 , 2013
|
ನವ೦ಬರ್ 19 , 2013
|
ಶ್ರೀ ಕ್ಷೇತ್ರ ನೀಲಾವರ ಪ್ರಶಸ್ತಿ ಪ್ರದಾನ
ಬ್ರಹ್ಮಾವರ :
ನೀಲಾವರ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮೇಳದ 4ನೇ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆಯಾಟ ಹಾಗೂ ಪ್ರಥಮ ಬಾರಿ ಆಯೋಜಿಸಿರುವ ಶ್ರೀ ಕ್ಷೇತ್ರ ನೀಲಾವರ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ದೇವಳದ ವಠಾರದಲ್ಲಿ ಜರಗಿತು.
ಶ್ರೀ ನೀಲಾವರ ಮೇಳದ ಯುವ ಭಾಗವತ ಶ್ರೀಧರ ಹಾರ್ಸಿಕಟ್ಟೆ ಹಾಗೂ ಬಡಗುತಿಟ್ಟಿನ ಹಿರಿಯ ಕಲಾವಿದ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ ಅವರಿಗೆ ಈ ಬಾರಿಯ ಶ್ರೀಕ್ಷೇತ್ರ ನೀಲಾವರ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಟಾರ್ ಶುಭಾಶಂಸನೆಗೈದರು.
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಗುಣಶೀಲ ನೀಲಾವರ ಕಾರ್ಯಕ್ರಮ ನಿರೂಪಿಸಿದರು. ಮೇಳದ ಸಂಚಾಲಕ ವೈ. ಕರುಣಾಕರ ಶೆಟ್ಟಿ, ಯಕ್ಷಗಾನ ವಿಮರ್ಶಕ ಪ್ರೊ| ಎಸ್.ವಿ. ಉದಯಕುಮಾರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಬು ದೇವಾಡಿಗ, ಎಂ. ಸೂರ್ಯನಾರಾಯಣ ಗಾಣಿಗ, ಮಹೇಂದ್ರ ಕುಮಾರ್, ಭುವನೇಂದ್ರ ದೇವಾಡಿಗ, ಸತೀಶ್ ಎಂ. ನಾಯ್ಕ, ಪ್ರೇಮಾವತಿ ಬಿ. ಉಳ್ಳೂರ, ಭವಾನಿ ಪಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
|
|
|